ಕಟ್ಟುತಿರುವುದು ಗೆದ್ದಲು
ಬೇರುಗಂಟಿಯ ಸುತ್ತಲು
ಮಣ್ಣ ರಾಶಿಯಗೂಡುತಾ
ನೆರಳಾಗುವುದೆಂದು
ಹುತ್ತವನು
ಬಂದು ಸೇರುತಿವೆ
ವಿಷದ ಹಾವುಗಳು
ಕೆಡವಲಾಗುತಿದೆ
ಕಟ್ಟಿದಾ ನಂಬಿಕೆಯ
ಎತ್ತರವನು
ಜೀವ ಸವೆಸಿದ
ದಣಿದ ದೇಹಗಳು
ನೂರು ಚಿಂತನೆ
ಏಕ ತತ್ವವು
ಮಣ್ಣಾಗುತಿವೆ
ಮೇಲೆ ನೋಡುತಾ
ಕೆಳಗೆ ಭಯದಲಿ
ಅಡಗಿ ಕುಳಿತ
ಆಸೆಗಳೆಲ್ಲವು
ಹಣ್ಣಾಗುತಿವೆ
ಯಾರು ಬಂದರೇನಂತೆ
ನಗುತಿವೆ ಮೋಡಗಳು
ಮುಳುಗುತಿವೆ ಬದುಕು
ಮತ್ತೆ ನೆನಪಾಗುತ್ತಿದೆ
ಆ ಸಾಲು
ನೀನಾರಿಗಾದೆಯೋ ಎಲೆ ಮಾನವ!