ಬುಧವಾರ, ಆಗಸ್ಟ್ 25, 2021

ಕಟ್ಟುತಿರುವುದು ಗೆದ್ದಲು 
ಬೇರುಗಂಟಿಯ ಸುತ್ತಲು
ಮಣ್ಣ ರಾಶಿಯಗೂಡುತಾ
ನೆರಳಾಗುವುದೆಂದು
ಹುತ್ತವನು
ಬಂದು ಸೇರುತಿವೆ
ವಿಷದ ಹಾವುಗಳು
ಕೆಡವಲಾಗುತಿದೆ
ಕಟ್ಟಿದಾ ನಂಬಿಕೆಯ
ಎತ್ತರವನು

ಜೀವ ಸವೆಸಿದ
ದಣಿದ ದೇಹಗಳು
ನೂರು ಚಿಂತನೆ
ಏಕ ತತ್ವವು
ಮಣ್ಣಾಗುತಿವೆ
ಮೇಲೆ ನೋಡುತಾ
ಕೆಳಗೆ ಭಯದಲಿ
ಅಡಗಿ ಕುಳಿತ
ಆಸೆಗಳೆಲ್ಲವು
ಹಣ್ಣಾಗುತಿವೆ

ಯಾರು ಬಂದರೇನಂತೆ
ನಗುತಿವೆ ಮೋಡಗಳು
ಮುಳುಗುತಿವೆ ಬದುಕು
ಮತ್ತೆ ನೆನಪಾಗುತ್ತಿದೆ
ಆ ಸಾಲು 
ನೀನಾರಿಗಾದೆಯೋ ಎಲೆ ಮಾನವ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ