ಶುಕ್ರವಾರ, ಏಪ್ರಿಲ್ 27, 2012

ಕಾತರಿಕೆ

ತಂಗಾಳಿ ನನ್ನ
ಮೈಸೋಕಿದಾಗ
ಮನಸೆಲ್ಲ ಹಿತವಾಗಿದೆ....
ಬಂಗಾರ ಬಣ್ಣ
ಮರೆಯಾಗಿ ಸಂಜೆ
ಬೆಳದಿಂಗಳಲ್ಲೇ ಕುಣಿದಾಡಿದೆ....
ಶೃತಿಯಾಗಿ ಒಲವ
ದ್ವನಿಗಾಗಿ ನಿನ್ನ
ಪ್ರತಿ ಗಳಿಗೆ ನಾನು
ಕಾಯುವೆ..... 
ಮನವನ್ನೇ ಕೇಳಿ
ಕನಸನ್ನ ಕಟ್ಟಿ 
ನಮ್ಮ ಪ್ರೀತಿ ಬದುಕ
ತೆರೆದಿಡುವ ಮುನ್ನ
ಯಾಕಾದೆ ಮೌನ
ನೀ ಹರಿಸೆ ಗಮನ......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ