ಭಾನುವಾರ, ಫೆಬ್ರವರಿ 23, 2020

ನೀಲಾಕಾಶವನು ತಿವಿದು
ಭೋರ್ಗರೆವ ಸಿಡಿಲು
ಧರೆಗಿಳಿದಿದೆ
ಇಳೆ ನಡುವ ಸೀಳಿ
ಹಸಿಮರವು ಬಾಡಿ
ಧರೆಗುರುಳಿದೆ

ಕರ್ಣವನು ಬಡಿದು
ತಲೆಭಾರದ ಮಾತುಗಳು
ನೆಮ್ಮದಿಯ ಕೆಡಿಸುತಿವೆ
ನಿನ್ನೊಲವಿನ ಸುಖಕ್ಕಾಗಿ
ಎದೆಗೊರಗಿ ಅಳುತಿವೆ
ನೋಡು ನಮ್ಮಿಬ್ಬರ ಕನಸು

ಯಾರ ನೋವಿನ ಶಾಪ
ಮನವು ಕದಡಿದ ಪಾಪ
ತಿಳಿಯದೇ ಈ ಸಿಡುಕು 
ಮಳೆ ಸುರಿದು ಬೆವರಳಿದು
ಹೊಸಜೀವ ಪುಟಿದೆದ್ದು
ಹಸಿರಾಗದೇ ಈ ಬದುಕು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ