ನೀಲಾಕಾಶವನು ತಿವಿದು
ಭೋರ್ಗರೆವ ಸಿಡಿಲು
ಧರೆಗಿಳಿದಿದೆ
ಇಳೆ ನಡುವ ಸೀಳಿ
ಹಸಿಮರವು ಬಾಡಿ
ಧರೆಗುರುಳಿದೆ
ಕರ್ಣವನು ಬಡಿದು
ತಲೆಭಾರದ ಮಾತುಗಳು
ನೆಮ್ಮದಿಯ ಕೆಡಿಸುತಿವೆ
ನಿನ್ನೊಲವಿನ ಸುಖಕ್ಕಾಗಿ
ಎದೆಗೊರಗಿ ಅಳುತಿವೆ
ನೋಡು ನಮ್ಮಿಬ್ಬರ ಕನಸು
ಯಾರ ನೋವಿನ ಶಾಪ
ಮನವು ಕದಡಿದ ಪಾಪ
ತಿಳಿಯದೇ ಈ ಸಿಡುಕು
ಮಳೆ ಸುರಿದು ಬೆವರಳಿದು
ಹೊಸಜೀವ ಪುಟಿದೆದ್ದು
ಹಸಿರಾಗದೇ ಈ ಬದುಕು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ