ಭಾನುವಾರ, ಅಕ್ಟೋಬರ್ 11, 2020

ಅರ್ಥಮಾಡಿಕೊಳ್ಳಲಿಲ್ಲವೆಂದು
ನೀ ಅಳುವುದೇಕೆ ಚೆಲುವ ತಾರೆ
ನಾ ಚಂದ್ರತಾರೆಯಲ್ಲ
ಬಾನಾಚೆಯಿಂದ ಇಳಿಯಲಾರೆ..

ನಾ ಭುವಿಯೊಡಲ ಆವಿಯು
ಮೋಡದೊಡನೆ ಬರುವೆನು
ನಿನ್ನ ನೋವ ತೊಳೆಯಲು
ಮಳೆಯಾಗಿ ಸುರಿವೆನು..

ಕನಸು ಕಾಣಲು ಚೆಂದವಂತೆ
ಒಪ್ಪಿ ಮನಸ್ಸು ನೀಡಲು
ನಲಿವುನೋವು ಹರಟೆ ಬೇಕು
ಪ್ರೀತಿ ಬದುಕ ತೀಡಲು..

ನೀ ನಗಲು ಜೀವದೊಲವೆ
ಹಗುರವಾಯಿತು ಎನ್ನೆದೆ
ಬೆಳಗುತಿಹ ದೀಪವಾದರೆ ನೀ
ಎಣ್ಣೆ ಬತ್ತಿಯ ತನುವು ನನ್ನದೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ